Kannada Duniya

ಸಂತೋಷ ಮತ್ತು ಜೀವನದಲ್ಲಿ ಯಶಸ್ಸು ಪಡೆಯಲು, ಶುಕ್ರವಾರದಂದು ಈ ವಿಶೇಷ ಕ್ರಮಗಳನ್ನು ಮಾಡಿ…!

ಲಕ್ಷ್ಮಿದೇವಿ ಸಂಪತ್ತಿಗೆ ಅಧಿದೇವತೆ. ಈಕೆಯನ್ನು ಭಕ್ತಿಯಿಂದ ಪೂಜಿಸಿದರೆ ಆಕೆಯ ಅನುಗ್ರಹದಿಂದ ನಿಮಗೆ ಸಂಪತ್ತು ದೊರೆಯುತ್ತದೆ. ಇದರಿಂದ ನೀವು ಜೀವನದಲ್ಲಿ ಯಾವುದೇ ಸಮಸ್ಯೆಗಳಿಲ್ಲದೇ ಜೀವನ ನಡೆಸಬಹುದು. ಹಾಗಾಗಿ ನೀವು ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳಲು ಆಕೆಗೆ ಪ್ರಿಯವಾದ ಶುಕ್ರವಾರದಂದು ಹೀಗೆ ಪೂಜೆ ಮಾಡಿ.

ನೀವು ಕೆಂಪು ಗುಲಾಬಿಯನ್ನು ಅರ್ಪಿಸಿದರೆ ದೇವಿ ಪ್ರಸನ್ನಳಾಗುತ್ತಾಳೆ.  ಅದೇ ವೇಳೆ ನೀವು ದೇವಿಗೆ ಕೆಂಪು ಬಳೆಗಳು, ಅಲಂಕಾರಿಕ ಸಾಮಾಗ್ರಿಗಳನ್ನು ಅರ್ಪಿಸಬೇಕು.

ಲಕ್ಷ್ಮಿದೇವಿಯನ್ನು ಸಂಜೆಯ ಸಮಯದಲ್ಲಿ ಗೋದುಳಿ ಲಗ್ನದಲ್ಲಿ ಪೂಜಿಸಿದರೆ ಒಳ್ಳೆಯದು. ಆದರೆ ನೀವು ಬೆಳಿಗ್ಗೆ ಬೇಗ ಎದ್ದು ಗಂಗಾಜಲದಲ್ಲಿ ಸ್ನಾನ ಮಾಡಿ ಸೂರ್ಯನಿಗೆ ನೀರನ್ನು ಅರ್ಪಿಸಬೇಕು. ಬಳಿಕ ಲಕ್ಷ್ಮಿದೇವಿಗೆ ಕೆಂಪು ಅಥವಾ ಗುಲಾಬಿ ಬಣ್ಣದ ಹೂ, ಹಣ್ಣುಗಳು, ಧೂಪ-ದೀಪಗಳನ್ನು ಅರ್ಪಿಸಿ ಪೂಜಿಸಬೇಕು.

ಅರಿಶಿನದ ಈ ಪರಿಹಾರವು ನಿಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ, ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯ ಮಳೆಯಾಗುತ್ತದೆ…!

ಶುಕ್ರವಾರದಂದು ಲಕ್ಷ್ಮಿ ನಾರಾಯಣರನ್ನು ಜಪಿಸಬೇಕು. ಹಾಗೇ ದೇವಿಗೆ ಖೀರ್ ಅನ್ನು ಅರ್ಪಿಸಿ ಆರತಿ ಬೆಳಗಬೇಕು.  ನೀವು ಕನಿಷ್ಠ 11 ಶುಕ್ರವಾರ ಉಪವಾಸ ವ್ರತ ಆಚರಿಸಿದರೆ ಲಕ್ಷ್ಮಿದೇವಿ ಬೇಗ ಪ್ರಸನ್ನನಳಾಗುತ್ತಾಳೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...