ಜಾತಕದಲ್ಲಿ ಶನಿ ಗ್ರಹ ಶಾಂತವಾಗಿದ್ದರೆ ನಿಮ್ಮ ಜೀವನದಲ್ಲಿ ಸಮಸ್ಯೆ ಕಡಿಮೆಯಾಗುತ್ತದೆ. ಹಾಗಾಗಿ ಶನಿಗೆ ಜ್ಯೋತಿಷ್ಯಶಾಸ್ತ್ರದಲ್ಲಿ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಹಾಗಾಗಿ ಶನಿಯನ್ನು ಶಾಂತವಾಗಿರಿಸಲು ಶ್ರೀಗಂಧದಿಂದ ಹೀಗೆ ಮಾಡಿ.
ಆಷಾಢ ಅಮವಾಸ್ಯೆಯಂದು ಈ ಪರಿಹಾರಗಳನ್ನು ಮಾಡಿದರೆ ಕಾಲ ಸರ್ಪ ದೋಷವನ್ನು ನಿವಾರಿಸಬಹುದು…!
ಶ್ರೀಗಂಧದ ಬೇರನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡಿ. ಇದರಿಂದ ಶನಿ ಅಶುಭ ಪ್ರಭಾವ ಕಡಿಮೆಯಾಗುತ್ತದೆ. ಹಾಗೇ ನಿಮ್ಮ ಮನಸ್ಸು ಕೂಡ ಉಲ್ಲಾಸದಿಂದ ತುಂಬಿರುತ್ತದೆ. ನೀವು ಹೆಚ್ಚು ಚಟುವಟಿಕೆಯಿಂದ ಇರಬಹುದು.
ನಿಮ್ಮ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಿದ್ದರೆ ಅಂತವರು ಶನಿವಾರ ಸೂರ್ಯಾಸ್ತದ ಬಳಿಕ ಅರಳೀಮರದ ಕೆಳಗೆ ಸಾಸಿವೆ ದೀಪವನ್ನು ಹಚ್ಚಿ ಶ್ರೀಗಂಧದ ಮಾಲೆಯನ್ನು ಹಾಕಿ. ಹಾಗೇ ಶನಿ ದೇವನಿಗೆ ಸಂಬಂಧಿಸಿದ ಮಂತ್ರವನ್ನು ಪಠಿಸಿ.