Kannada Duniya

ಕನಸಿನಲ್ಲಿ ಕಂಡರೆ ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆಯಂತೆ…!

ಕನಸು ಭವಿಷ್ಯದಲ್ಲಿ ಸಂಭವಿಸುವ ಒಳ್ಳೆಯ ಮತ್ತು ಕೆಟ್ಟ ಘಟನೆಗಳನ್ನು ಸೂಚಿಸುತ್ತದೆ. ಕೆಲವು ಕನಸುಗಳು ಹಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತವೆ. ಕನಸಿನಲ್ಲಿ ಈ ಘಟನೆಗಳು ನಡೆದರೆ ನೀವು ಅತಿ ಶೀಘ್ರದಲ್ಲಿಯೇ ಶ್ರೀಮಂತರಾಗುತ್ತೀರಿ ಎಂಬ ಅರ್ಥವನ್ನು ನೀಡುತ್ತದೆಯಂತೆ. ಹಾಗಾದ್ರೆ ಅಂತಹ ಕನಸುಗಳು ಯಾವುದೆಂಬುದನ್ನು ತಿಳಿಯೋಣ.

-ನಿಮ್ಮ ಕನಸಿನಲ್ಲಿ ಜೇನುಗೂಡು ಕಾಣಿಸಿದರೆ ನೀವು ಬಹಳ ಬೇಗನೆ ಶ್ರೀಮಂತರಾಗುತ್ತೀರಿ ಎಂಬುದನ್ನು ತಿಳಿಸುತ್ತದೆಯಂತೆ.

-ನಿಮ್ಮ ಕನಸಿನಲ್ಲಿ ನೀವು ಮರ ಹತ್ತುವುದನ್ನು ನೋಡಿದರೆ ನಿಮ್ಮ ಆರ್ಥಿಕ ಸ್ಥಿತಿ ಶೀಘ್ರದಲ್ಲಿಯೇ ಸುಧಾರಿಸಲಿದೆ , ನಿಮ್ಮ ಸಾಲದ ಸಮಸ್ಯೆ ಬೇಗನೆ ನಿವಾರಣೆಯಾಗುತ್ತದೆ ಎಂದರ್ಥವಂತೆ.

-ನಿಮ್ಮ ಕನಸಿನಲ್ಲಿ ನೀವು ಪರ್ವತ ಹತ್ತುವ ಕನಸು ಕಂಡರೆ ಇದು ಒಳ್ಳೆಯ ಸಂಕೇತವಂತೆ. ಹಾಗೇ ಕನಸಿನಲ್ಲಿ ಹಣ್ಣುಗಳನ್ನು ತುಂಬಿದ ಮರವನ್ನು ಕಂಡರೆ ಇದು ಸಂತೋಷ ಮತ್ತು ಸಮೃದ್ದಿಯ ಸಂಕೇತ ಎನ್ನಲಾಗುತ್ತದೆ.

-ನೀವು ಕನಸಿನಲ್ಲಿ ಹಾಲು ಕುಡಿಯುವುದು ಕಂಡರೆ ಇದು ಶುಭದ ಸಂಕೇತವಂತೆ. ಇದರರ್ಥ ನೀವು ಜೀವನದಲ್ಲಿ ಯಶಸ್ಸನ್ನು ಪಡೆಯಲಿದ್ದಿರಿ ಎಂದರ್ಥವಂತೆ.

-ಕನಸಿನಲ್ಲಿ ಸುಡುವ ದೀಪವನ್ನು ನೋಡುವುದು ಸಹ ಶುಭದ ಸಂಕೇತವಾಗಿದೆ. ಹಾಗೇ ಮಗು ನಿಮ್ಮೊಂದಿಗೆ ನಗುವುದನ್ನು ಕಂಡರೆ ನಿಮಗೆ ಎಲ್ಲಿದ್ದರೂ ಹಣ ಬರುತ್ತದೆ ಎಂದರ್ಥವಂತೆ.

ಬಿಳಿ ಬಣ್ಣದ ಇವುಗಳು ಕನಸಿನಲ್ಲಿ ಬಂದರೆ ಶೀಘ್ರದಲ್ಲಿಯೇ ಹಣ ಬರುತ್ತದೆಯಂತೆ

-ನೀವು ಕನಸಿನಲ್ಲಿ ಚಿನ್ನವನ್ನು ನೋಡಿದರೆ ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಬಲವಾಗಿರುತ್ತದೆ ಎಂದರ್ಥವಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...