ಜ್ಯೋತಿಷ್ಯಶಾಸ್ತ್ರದ ಪ್ರಕಾರ ಜಾತಕದಲ್ಲಿ ನವಗ್ರಹಗಳ ದೋಷವಿದ್ದರೆ ಅದರ ಪರಿಣಾಮ ಮನುಷ್ಯರ ಜೀವನದ ಮೇಲಾಗುತ್ತದೆಯಂತೆ. ಅದರಲ್ಲಿ ಶನಿ ದೋಷವು ಬಹಳ ಕಠಿಣವಾಗಿರುತ್ತದೆ. ಹಾಗಾಗಿ ನೀವು ಶನಿಯ ಮೆಚ್ಚುಗೆ ಪಡೆಯಲು ಶಮಿ ವೃಕ್ಷಕ್ಕೆ ನೀರಿನ ಜೊತೆ ಇದನ್ನು ಬೆರೆಸಿ ಅರ್ಪಿಸಿ.
ಶಮಿ ವೃಕ್ಷ ಶನಿಗೆ ಬಹಳ ಪ್ರಿಯವಾದುದು. ಹಾಗೇ ಬಿಲ್ವಪತ್ರೆ ಶಿವನಿಗೆ ಬಹಳ ಪ್ರಿಯವಾದುದು. ಅಲ್ಲದೇ ಶನಿಗೆ ಶಿವನೆಂದರೆ ಪ್ರೀತಿ ಹಾಗೇ ಶಿವನಿಗೆ ಶನಿಯೆಂದರೆ ಬಹಳ ಪ್ರಿಯ. ಹಾಗಾಗಿ ಶಮಿ ವೃಕ್ಷಕ್ಕೆ ನೀರನ್ನು ಅರ್ಪಿಸುವಾಗ ಬಿಲ್ವಪತ್ರೆಯನ್ನು ನೀರಿನಲ್ಲಿ ಬೆರೆಸಿ ಅರ್ಪಿಸಿ. ಹಾಗೇ ಶಿವಲಿಂಗಕ್ಕೆ ನೀರನ್ನು ಅರ್ಪಿಸುವಾಗ ಬಿಲ್ವಪತ್ರೆಯ ಜೊತೆಗೆ ಶಮಿ ವೃಕ್ಷದ ಎಲೆಗಳನ್ನು ಅರ್ಪಿಸಿ.
ಇದರಿಂದ ಶನಿ ಮತ್ತು ಶಿವನ ಕೃಪೆಯಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸುತ್ತದೆಯಂತೆ. ಹಾಗೇ ಮನೆಯ ಬಳಿ ಶಮಿ ವೃಕ್ಷವನ್ನು ನೆಡಿ. ಶನಿವಾರದಂದು ನೀರು ಮತ್ತು ಹಾಲನ್ನು ಬೆರೆಸಿ ಶಮಿ ವೃಕ್ಷಕ್ಕೆ ಅರ್ಪಿಸಿ. ಇದರಿಂದ ಮನೆಯ ಸದಸ್ಯರು ರೋಗ ರುಜಿನಗಳಿಂದ ಮುಕ್ತರಾಗುತ್ತಾರಂತೆ.