ಶನಿದೇವನನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಶನಿಯ ಅನುಗ್ರಹವಿಲ್ಲದೆ ಯಾವುದೇ ವ್ಯಕ್ತಿ ಒಳ್ಳೆಯ ಕೆಲಸ ಮಾಡಲು ಸಾಧ್ಯವಿಲ್ಲ. ಹಾಗಾಗಿ ಶನಿದೇವನ ಅನುಗ್ರಹ ಬಹಳ ಮುಖ್ಯ. ಶನಿದೇವನ ಅನುಗ್ರಹ ಪಡೆಯಲು ಮುಂಜಾನೆ ಈ ಪುಟ್ಟ ಕೆಲಸ ಮಾಡಿ.
-ಶನಿ ದೇವನನ್ನು ಮೆಚ್ಚಿಸಲು ಸೂರ್ಯೋದಯಕ್ಕೂ ಮುನ್ನ ಅರಳೀಮರಕ್ಕೆ ನೀರನ್ನು ಅರ್ಪಿಸಬೇಕು. ಇದರಿಂದ ಶನಿಯ ಮಹಾದಶಾ ಪರಿಣಾಮ ಬೀರುವುದಿಲ್ಲವಂತೆ. ಯಾಕೆಂದರೆ ಅರಳೀಮರವನ್ನು ಪೂಜಿಸಿದವರ ಮೇಲೆ ಶನಿಯ ಕೆಟ್ಟ ದೃಷ್ಟಿ ಬೀಳುವುದಿಲ್ಲ ಎಂದು ಬ್ರಹ್ಮದೇವ ವರ ನೀಡಿದ್ದಾನಂತೆ.
ಮನೆಯ ದಕ್ಷಿಣ ದಿಕ್ಕಿನಲ್ಲಿ ಈ ಕೆಲಸಗಳನ್ನು ಮಾಡಿದರೆ ದಾರಿದ್ರ್ಯ ಆವರಿಸುತ್ತದೆಯಂತೆ…!
– ಮುಂಜಾನೆ ಬೆಳಿಗ್ಗೆ ಬೇಗ ಎದ್ದು ಸ್ನಾನಾಧಿಗಳನ್ನು ಮಾಡಿ ಸೂರ್ಯದೇವನಿಗೆ ನೀರನ್ನು ಅರ್ಪಿಸಿ. ಇದರಿಂದ ಶನಿದೇವನ ಅನುಗ್ರಹ ದೊರೆಯುತ್ತದೆಯಂತೆ.
-ಹಾಗೇ ಮುಂಜಾನೆ ಶಮಿ ವೃಕ್ಷಕ್ಕೆ ನೀರನ್ನು ಅರ್ಪಿಸಿ ಅದಕ್ಕೆ ದೀಪ ಹಚ್ಚಿ ಪೂಜೆ ಮಾಡಿದರೆ ಶನಿದೇವ ಸಂತೋಷಗೊಳ್ಳುತ್ತಾರಂತೆ.