Kannada Duniya

ಮಸಾಲೆ ಪದಾರ್ಥಗಳನ್ನು ಬಳಸಿ ನಿಮ್ಮ ಅದೃಷ್ಟವನ್ನು ಹೆಚ್ಚಿಸಿಕೊಳ್ಳಬಹುದು….!

ಭಾರತದ ಮಸಾಲೆ ಪದಾರ್ಥಗಳು ವಿಶ್ವದಾದ್ಯಂತ ಹೆಸರುವಾಸಿಯಾಗಿದೆ. ಭಾರತದಲ್ಲಿ ಅಡುಗೆಗೆ ಹಲವು ಬಗೆಯ ಮಸಾಲೆ ಪದಾರ್ಥಗಳನ್ನು ಬಳಸುತ್ತಾರೆ. ಕೊರೊನಾ ಕಷಾಯ ಮಾಡಲು ಕೂಡ ಇವುಗಳನ್ನು ಬಳಸುತ್ತಾರೆ. ಯಾಕೆಂದರೆ ಇವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಮಾತ್ರವಲ್ಲ ಈ ಮಸಾಲೆ ಪದಾರ್ಥಗಳನ್ನು ಬಳಸಿ ನಮ್ಮ ಅದೃಷ್ಟವನ್ನು ಕೂಡ ಹೆಚ್ಚಿಸಿಕೊಳ್ಳಬಹುದು.

ಲವಂಗ ಮತ್ತು ಕರಿಮೆಣಸು : ಇವೆರಡು ಶನಿ ಪ್ರಾಬಲ್ಯದ ಮಸಾಲೆಗಳಾಗಿ ಪರಿಗಣಿಸಲಾಗುತ್ತದೆ. ಸಾಸಿವೆ ಎಣ್ಣೆಯಲ್ಲಿ ಲವಂಗ ಮತ್ತು ಕರಿಮೆಣಸು ಹಾಕಿ ದೀಪ ಬೆಳಗಿದರೆ ಶನಿ ಗ್ರಹದ ದುಷ್ಪರಿಣಾಮಗಳನ್ನು ನಿವಾರಿಸಬಹುದು.

ಇಂಗು : ಇಂಗು ಬುಧ ಗ್ರಹಕ್ಕೆ ಸಂಬಂಧಿಸಿದ್ದಾಗಿದೆ. ಊಟದಲ್ಲಿ ಇಂಗನ್ನು ಸೇರಿಸಿ ಸೇವಿಸುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಬುಧ ದೋಷ ನಿವಾರಣೆಯಾಗುತ್ತದೆ.

ಜೀರಿಗೆ : ಜೀರಿಗೆ ರಾಹು ಮತ್ತು ಕೇತುವಿಗೆ ಸಂಬಂಧಿಸಿದೆ ಎಂದು ನಂಬಲಾಗುತ್ತದೆ. ರಾಹು ಮತ್ತು ಕೇತು ಕೆಟ್ಟ ಸ್ಥಿತಿಯಲ್ಲಿದ್ದಾಗ ವ್ಯಕ್ತಿ ಜೀರಿಗೆಯನ್ನು ಶನಿವಾರ ದಾನ ಮಾಡಬೇಕು. ಇದರಿಂದ ರಾಹು-ಕೇತು ಸ್ಥಿತಿ ಸುಧಾರಿಸುತ್ತದೆ.

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಕೈಯ ರೇಖೆಗಳಿಂದ ನಿಮಗೆ ಎಷ್ಟು ಮಕ್ಕಳು ಎಂಬುದನ್ನು ತಿಳಿಯಬಹುದಂತೆ….!

ಸೊಂಪು : ಕಲ್ಲುಸಕ್ಕರೆ ಜೊತೆಗೆ ಸೊಂಪನ್ನು ಬೆರೆಸಿ ತಿಂದರೆ ಶುಕ್ರ ಗ್ರಹ ಬಲಗೊಳ್ಳುತ್ತದೆ. ಹಾಗೇ ನಿಮ್ಮ ಜಾತಕದಲ್ಲಿ ಮಂಗಳಗ್ರಹ ದುರ್ಬಲವಾಗಿದ್ದರೆ ಬೆಲ್ಲದಲ್ಲಿ ಸೊಂಪನ್ನಿ ಬೆರೆಸಿ ಸೇವಿಸಿ.

ಅರಿಶಿನ : ಅರಿಶಿನ ಗುರು ಗ್ರಹಕ್ಕೆ ಸಂಬಂಧಿಸಿದೆ. ಗುರು ಗ್ರಹ ದುರ್ಬಲವಾಗಿರುವ ವ್ಯಕ್ತಿ ತಮ್ಮ ಜೇಬಿನಲ್ಲಿ ಕರವಸ್ತ್ರದಲ್ಲಿ ಚಿಟಿಕೆ ಅರಿಶಿನವನ್ನು ಇಟ್ಟುಕೊಳ್ಳಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...