ಹಿಂದೂಧರ್ಮದಲ್ಲಿ ಕೆಲವು ಘಟನೆಗಳನ್ನು ಶುಭ, ಅಶುಭವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ನಿಮ್ಮ ಜೀವನದಲ್ಲಿ ಯಾವುದೇ ಘಟನೆ ನಡೆದರೂ ಅದು ಶುಭವೇ? ಅಶುಭವೇ? ಎಂಬುದನ್ನು ತಿಳಿದು, ಸಮಸ್ಯೆಗಳು ಬರುವ ಮುನ್ನ ಪರಿಹರಿಸಿಕೊಳ್ಳಿ. ಹಾಗಾದ್ರೆ ಈ ಘಟನೆಗಳನ್ನು ಅಶುಭ ಎನ್ನಲಾಗುತ್ತದೆ.
ಶಾಸ್ತ್ರದ ಪ್ರಕಾರ, ಕೀಟಗಳು, ಇಲಿಗಳು , ಜೇನುನೋಣಗಳು, ಗೆದ್ದಲುಗಳು ಅಥವಾ ಯಾವುದೇ ಜೀವಿಗಳು ಇದ್ದಕ್ಕಿದ್ದಂತೆ ಮನೆಗೆ ಬಂದರೆ ಅದು ಅಶುಭವಂತೆ. ಇದರಿಂದ ನಿಮ್ಮ ಮನೆಗೆ ದುರಾದೃಷ್ಟ ಆವರಿಸುತ್ತದೆ ಎಂಬುದನ್ನು ತಿಳಿಸುತ್ತದೆಯಂತೆ.
ದಿನದ ಆರಂಭದಲ್ಲಿ ವಿಶೇಷ ಕಿವಿ ಹಣ್ಣಿನ ಜ್ಯೂಸ್ ಕುಡಿದ್ರೆ, ಸಾಕಷ್ಟು ಶಕ್ತಿಯನ್ನು ಪಡೆಯುತ್ತೀರಿ
ಮನೆಯಲ್ಲಿ ಕೆಂಪು ಇರುವೆಗಳು ಬಂದರೆ ಮನೆಯ ಸದಸ್ಯರು ಒಬ್ಬರಿಗೊಬ್ಬರು ಜಗಳವಾಡುತ್ತಾರೆ ಅಥವಾ ಮನೆಯ ಸದಸ್ಯರಿಗೆ ಅನಾರೋಗ್ಯ ಸಮಸ್ಯೆಗಳು ಕಾಡಬಹುದು ಎಂಬುದನ್ನು ಸೂಚಿಸುತ್ತದೆ.
ಮನೆಯ ಬಳಿ ಗೂಬೆ ಅಳುತ್ತಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಮನೆಯಲ್ಲಿ ಸಾವು ಸಂಭವಿಸಲಿದೆ ಎಂಬುದನ್ನು ತಿಳಿಸುತ್ತದೆ. ಹಾಗೇ ನಿಮ್ಮ ಮನೆಯಲ್ಲಿ ಗಾಜು, ಕನ್ನಡಿ ಒಡೆದರೆ ಮನೆಗೆ ಕೆಟ್ಟದಾಗುತ್ತದೆ ಎಂಬುದನ್ನು ತಿಳಿಸುತ್ತದೆ.