Kannada Duniya

ಜೀವನದಲ್ಲಿ ಪ್ರಗತಿ ಸಾಧಿಸುವುದು ಖಚಿತವಂತೆ ಈ ವಸ್ತುಗಳನ್ನು ಪೂಜಿಸಿದರೆ….!

ಹಿಂದೂ ಧರ್ಮದಲ್ಲಿ ಗರುಡ ಪುರಾಣಕ್ಕೆ ಹೆಚ್ಚಿನ ಮಹತ್ವವಿದೆ. ಇದರಲ್ಲಿ ಅನೇಕ ವಿಚಾರಗಳನ್ನು ತಿಳಿಸಲಾಗಿದೆ. ಇದರಲ್ಲಿ ಜೀವನದಲ್ಲಿ ಯಶಸ್ವಿಯಾಗಲು ಏನೆಲ್ಲಾ ಮಾಡಬೇಕು ಎಂಬುದನ್ನು ಉಲ್ಲೇಖಿಸಲಾಗಿದೆ. ಅದರಂತೆ ಈ ವಸ್ತುಗಳನ್ನು ಪೂಜಿಸುವುದರಿಂದ ಜೀವನದಲ್ಲಿ ಎಲ್ಲವನ್ನು ಸಾಧಿಸಬಹುದಂತೆ.

ಗರುಡ ಪುರಾಣದಲ್ಲಿ ತಿಳಿಸಿದಂತೆ ಭಗವಾನ್ ವಿಷ್ಣುವನ್ನು ಪೂಜಿಸಿದರೆ ಜೀವನದಲ್ಲಿ ಎದುರಾದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ. ಮತ್ತು ನೀವು ಕೈಗೊಂಡ ಕಾರ್ಯಗಳು ಪೂರ್ಣವಾಗುತ್ತದೆಯಂತೆ.

ಈ ಸಾಲು ನಿಮ್ಮ ಕೈಯಲ್ಲಿದ್ದರೆ ಶ್ರೀಮಂತ ಮನೆತನದ ಹುಡುಗಿಯನ್ನು ಮದುವೆಯಾಗುತ್ತೀರಂತೆ…!

ನದಿಗಳಲ್ಲಿ ಪವಿತ್ರವಾದ ನದಿ ಗಂಗಾ ನದಿ. ಈ ನದಿಯ ನೀರು ಎಲ್ಲಾ ಪಾಪಗಳನ್ನು ತೊಳೆಯುವಂತಹ ಶಕ್ತಿಯನ್ನು ಹೊಂದಿದೆಯಂತೆ. ಹಾಗಾಗಿ ಗಂಗಾ ನದಿ ಅಥವಾ ಗಂಗಾಜಲವನ್ನು ಪೂಜಿಸುವುದರಿಂದ ಜೀವನದಲ್ಲಿ ಯಶಸ್ಸು ಲಭಿಸುತ್ತದೆಯಂತೆ.

ತುಳಿಸಿಯನ್ನು ಲಕ್ಷ್ಮಿದೇವಿಯ ಸ್ವರೂಪವೆಂದು ಕರೆಯುತ್ತಾರೆ. ಹಾಗಾಗಿ ತುಳಸಿ ಗಿಡವನ್ನು ಪ್ರತಿದಿನ ದೀಪ ಹಚ್ಚಿ ಪೂಜಿಸಿದರೆ ಜೀವನದಲ್ಲಿ ಏಳಿಗೆ ಕಾಣುತ್ತೀರಂತೆ. ಹಾಗೇ ಹಸುವಿನ ದೇಹದಲ್ಲಿ ಮುಕೋಟಿ ದೇವತೆಗಳು ನೆಲಸಿರತ್ತಾರಂತೆ ಹಾಗಾಗಿ ಹಸುವನ್ನು ಪೂಜಿಸುವುದು ಕೂಡ ಒಳ್ಳೆಯದಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...