Kannada Duniya

ಗ್ರಹಗಳನ್ನು ಮೆಚ್ಚಿಸಲು ಇವುಗಳನ್ನು ದಾನ ಮಾಡಿ…!

ನಮ್ಮ ಅದೃಷ್ಟ, ದುರಾದೃಷ್ಟವನ್ನು ಗ್ರಹಗಳು ನಿರ್ಧರಿಸುತ್ತವೆ. ಹಾಗಾಗಿ ನಾವು ಗ್ರಹಗಳನ್ನು ಮೆಚ್ಚಿಸುವಂತಹ ಕೆಲಸಗಳನ್ನು ಮಾಡಿದರೆ ಗ್ರಹಗಳ ಅನುಗ್ರಹದಿಂದ ನಮಗೆ ಅದೃಷ್ಟ ಒಲಿಯುತ್ತವೆ. ಹಾಗಾಗಿ ಗ್ರಹಗಳ ಅನುಗ್ರಹ ದೊರೆಯಲು ಇವುಗಳನ್ನು ದಾನ ಮಾಡಿ.

ಸೂರ್ಯ ಗ್ರಹದ ಅನುಗ್ರಹ ಪಡೆಯಲು ಗೋಧಿ ಮತ್ತು ಬೆಲ್ಲವನ್ನು ದಾನ ಮಾಡಿ. ಇದರಿಂದ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ಸಿಗುತ್ತದೆ.

ಚಂದ್ರ ಗ್ರಹವನ್ನು ಮೆಚ್ಚಿಸಲು ಹಾಲು, ನೀರು ಮತ್ತು ಸಕ್ಕರೆಯನ್ನು ದಾನ ಮಾಡಿ ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.

ಮಂಗಳ ಗ್ರಹದ ಅನುಗ್ರಹಕ್ಕಾಗಿ ಮಸೂರವನ್ನು ಹುಣ್ಣಿಮೆಯ ದಿನದಂದು ದಾನ ಮಾಡಿ. ಇದರಿಂದ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ.

ಬುಧನನ್ನು ಮೆಚ್ಚಿಸಲು ನೆಲ್ಲಿಕಾಯಿ ಮತ್ತು ಹಸಿರು ತರಕಾರಿಗಳನ್ನು ದಾನ ಮಾಡಿ. ಇದು ನಿಮ್ಮ ಬುದ್ದಿವಂತಿಕೆಯನ್ನು ಹೆಚ್ಚಿಸುತ್ತದೆ.

ಈ ರಾಶಿಯವರು ಇತರರ ಆದೇಶವನ್ನು ಪಾಲಿಸುವುದಿಲ್ಲ…!

ಗುರುಗ್ರಹದ ಅನುಗ್ರಹ ಪಡೆಯಲು ಬಾಳೆಹಣ್ಣು, ಮೆಕ್ಕೆಜೋಳ, ಮತ್ತು ಕಡಲೆಯನ್ನು ದಾನ ಮಾಡಿ. ಇದರಿಂದ ಆರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ.

ಶುಕ್ರನ ಕೃಪೆ ದೊರೆಯಲು ತುಪ್ಪ ಮತ್ತು ಬೆಣ್ಣೆ, ಬಿಳಿ ಎಳ್ಳನ್ನು ದಾನ ಮಾಡಿ. ಕಣ್ಣಿನ ಸಮಸ್ಯೆ ದೂರವಾಗುತ್ತದೆ.

ಶನಿಗ್ರಹದ ಅನುಗ್ರಹ ಪಡೆಯಲು ಕಪ್ಪು ಎಳ್ಳು, ಸಾಸಿವೆ ಎಣ್ಣೆಯನ್ನು ದಾನ ಮಾಡಿ. ಇದರಿಂದ ದೀರ್ಘಕಾಲದ ಸಮಸ್ಯೆಗಳು ದೂರವಾಗುತ್ತವೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...