ಜ್ಯೋತಿಷ್ಯದಲ್ಲಿ ಆಲದ ಮರಕ್ಕೆ ವಿಶೇಷ ಮಹತ್ವವಿದೆ. ಹಿಂದೂಧರ್ಮದಲ್ಲಿ ಆಲದ ಮರಕ್ಕೆ ಪೂಜನೀಯ ಸ್ಥಾನವಿದೆ. ಇದನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ನಿಮಗೆ ಉದ್ಯೋಗದಲ್ಲಿ ಸಮಸ್ಯೆ ಇದ್ದರೆ ಆಲದ ಮರದ ಬಳಿ ಈ ಪರಿಹಾರ ಮಾಡಿ.
ನಿಮ್ಮ ಇಷ್ಟಪಟ್ಟ ಕೆಲಸ ನಿಮಗೆ ಸಿಗಬೇಕೆಂದರೆ ಭಾನುವಾರದಂದು ಆಲದ ಮರದ ಎಲೆಯಲ್ಲಿ ನಿಮ್ಮ ಕೋರಿಕೆಯನ್ನು ಬರೆದು ಹರಿಯುವ ನೀರಿನಲ್ಲಿ ಬಿಡಿ. ಇದರಿಂದ ನಿಮ್ಮ ಇಷ್ಟಾರ್ಥ ಈಡೇರುತ್ತದೆ.
ವ್ಯವಹಾರದಲ್ಲಿ ಪ್ರಗತಿಯನ್ನು ಕಾಣಲು ಶನಿವಾರದಂದು ಆಲದ ಮರದ ಕಾಂಡಕ್ಕೆ ಅರಿಶಿನ, ಕುಂಕುಮವನ್ನು ಅರ್ಪಿಸಿ.
ಮನೆಯಲ್ಲಿ ಜಗಳ, ಕಲಹಗಳು ನಡೆಯುತ್ತಿದ್ದರೆ ಅದನ್ನು ನಿವಾರಿಸಲು ಪ್ರತಿದಿನ ಆಲದ ಮರದ ಕೆಳಗೆ ತುಪ್ಪದ ದೀಪವನ್ನು ಹಚ್ಚಿ ವಿಷ್ಣುವನ್ನು ಧ್ಯಾನಿಸಿ.
ಕುಟುಂಬದಲ್ಲಿ ಯಾರಾದರೂ ತುಂಬಾ ಭಯಪಡುತ್ತಿದ್ದರೆ ಅದನ್ನು ನಿವಾರಿಸಲು ಆಲದ ಮರದ ಕೆಳಗೆ ಕುಳಿತು ಹನುಮ ಚಾಲೀಸ್ ಪಠಿಸಿ. ಇದರಿಂದ ಭಯ, ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ.
ಅನಾರೋಗ್ಯದಿಂದ ಬಳಲುತ್ತಿರುವವರು ತಮ್ಮ ದಿಂಬದ ಕೆಳಗೆ ಆಲದ ಮರದ ಬೇರನ್ನು ಇಟ್ಟುಕೊಂಡರೆ ಆರೋಗ್ಯ ಸುಧಾರಿಸುತ್ತದೆ.