Kannada Duniya

Chanyaka niti : ಈ ವಿಚಾರಗಳು ಶತ್ರುಗಳಿಗೆ ತಿಳಿಯದಂತೆ ನೋಡಿಕೊಳ್ಳಿ, ಇಲ್ಲವಾದರೆ ನಷ್ಟವಾಗುತ್ತದೆಯಂತೆ…!

ಪ್ರತಿ ಯಶಸ್ವಿ ವ್ಯಕ್ತಿಗಳಿಗೂ ಶತ್ರುಗಳಿರುತ್ತಾರೆ ಎಂದು ಚಾಣಕ್ಯರು ಹೇಳುತ್ತಾರೆ. ಕೆಲವರು ನಮಗೆ ತಿಳಿದಿರುವ ಶತ್ರುಗಳಾದರೆ, ಇನ್ನೂ ಕೆಲವರು ನಮಗೆ ತಿಳಿಯದೆ ನಮ್ಮ ಮಿತ್ರರಂತೆ ನಟಿಸುತ್ತಾ ಇರುತ್ತಾರೆ. ಇವರು ನಮ್ಮ ಯಶಸ್ವಿಗೆ ಅಡ್ಡಿಯನ್ನುಂಟು ಮಾಡುತ್ತಿರುತ್ತಾರೆ. ಹಾಗಾಗಿ ಆಚಾರ್ಯ ಚಾಣಕ್ಯರು ನಮ್ಮ ಶತ್ರುಗಳಿಗೆ ನಮ್ಮ ವಿಚಾರಗಳನ್ನು ತಿಳಿಯದಂತೆ ನೋಡಿಕೊಳ್ಳಿ ಎಂದು ತಮ್ಮ ನೀತಿಯಲ್ಲಿ ತಿಳಿಸಿದ್ದಾರೆ.

ವ್ಯಕ್ತಿಯು ತನ್ನ ಯೋಜನೆಗಳನ್ನು ಇತರರ ಜೊತೆ ಹಂಚಿಕೊಳ್ಳುವಾಗ ಎಚ್ಚರದಿಂದಿರಿ. ಯಾಕೆಂದರೆ ಕೆಲವೊಮ್ಮೆ ವ್ಯಕ್ತಿಯು ತಮಗೆ ಅರಿವಿಲ್ಲದಂತೆ ಜನರೊಂದಿಗೆ ತಮ್ಮ ಯೋಜನೆಗಳನ್ನು ಹಂಚಿಕೊಳ್ಳುತ್ತಾರೆ. ಆಗ ಆ ವಿಚಾರ ನಮ್ಮ ಶತ್ರುಗಳಿಗೆ ತಿಳಿದರೆ ಅದರಿಂದ ಅವರಿಗೆ ಪ್ರಯೋಜನವಾಗುತ್ತದೆ. ಇದರಿಂದ ನಿಮ್ಮ ಯೋಜನೆಗೆ ಅಡ್ಡಿಯಾಗಬಹುದು. ಅಥವಾ ಅವರು ಹಾನಿ ಮಾಡಲು ಪ್ರಯತ್ನಿಸಬಹುದು.

ಚಾಣಕ್ಯ ನೀತಿ : ಈ ವ್ಯಕ್ತಿಯು ಪ್ರತಿಯೊಂದು ಸನ್ನಿವೇಶದಲ್ಲೂ ಯಶಸ್ಸನ್ನು ಪಡೆಯುತ್ತಾನೆ

ನೀವು ನ್ಯೂನತೆಗಳನ್ನು ಹೊಂದಿರಬಾರದು ಮತ್ತು ಒಂದು ವೇಳೆ ಇದ್ದರೆ ಅದನ್ನು ತ್ಯಜಿಸಬೇಕು. ಹಾಗೇ ನಮ್ಮ ನ್ಯೂನತೆಗಳು ನಮ್ಮ ಶತ್ರುಗಳಿಗೆ ತಿಳಿಯದಂತೆ ನೋಡಿಕೊಳ್ಳಿ. ಇಲ್ಲವಾದರೆ ಅವರು ಅದನ್ನು ಬಳಸಿಕೊಂಡು ನಮಗೆ ನಿರಂತರವಾಗಿ ಹಾನಿ ಮಾಡಬಹುದು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...