Kannada Duniya

ಈ ಕೆಲಸ ಬುಧವಾರದಂದು ಮಾಡಿದರೆ ದಾರಿದ್ರ್ಯ ಕಾಡುತ್ತದೆ….!

ಹಿಂದೂಧರ್ಮದಲ್ಲಿ ಬುಧವಾರದಂದು ಗಣೇಶನನ್ನು ಪೂಜಿಸಲಾಗುತ್ತದೆ. ಇದರಿಂದ ನಿಮ್ಮ ಕಾರ್ಯದಲ್ಲಿ ಯಾವುದೇ ಅಡೆತಡೆಗಳು ಎದುರಾದರೂ ಅದು ದೂರವಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಬುಧವಾರದಂದು ಗಣೇಶನನ್ನು ಭಕ್ತಿಯಿಂದ ಪೂಜಿಸಿ. ಆದರೆ ಈ ಕೆಲಸಗಳನ್ನು ಮಾಡಬೇಡಿ. ಇದರಿಂದ ದಾರಿದ್ರ್ಯ ಆವರಿಸುತ್ತದೆ.

ಬುಧವಾರದಂದು ಗಣೇಶ ರುದ್ರಾಕ್ಷವನ್ನು ಧರಿಸಿ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ. ಹಾಗೇ ಬುಧವಾರದಂದು ಮನೆಯ ಸದಸ್ಯರು ಸಿಂಧೂರ ತಿಲಕವನ್ನು ಧರಿಸಿ ಮನೆಯಿಂದ ಹೊರಗೆ ಹೋದರೆ ಒಳ್ಳೆಯದು. ಹಾಗೇ ಬುಧವಾರದಂದು ಗಣೇಶನ ಜೊತೆ ತಾಯಿ ದುರ್ಗಾದೇವಿಯನ್ನು ಪೂಜಿಸಿದರೆ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ.

 Chanyaka niti: ಆಚಾರ್ಯ ಚಾಣಕ್ಯರ ಕಹಿ ಮಾತುಗಳು ನಿಮ್ಮ ಜೀವನವನ್ನು ಬದಲಾಯಿಸುತ್ತವೆ, ನೀವು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ….!

ಹಾಗೇ ಬುಧವಾರದಂದು ಸಾಲದ ವಹಿವಾಟನ್ನು ನಡೆಸಬೇಡಿ. ಈ ದಿನದಂದು ಸಾಲ ಪಡೆದರೆ ಆರ್ಥಿಕ ನಷ್ಟ ಉಂಟಾಗುತ್ತದೆ. ಬುಧವಾರದಂದು ಕಹಿ ಪದಾರ್ಥಗಳನ್ನು ಸೇವಿಸಬೇಡಿ. ಬೇರೆಯವರನ್ನು ನಿಂದಿಸಬೇಡಿ. ಇದರಿಂದ ಸಂಪತ್ತು ನಾಶವಾಗುತ್ತದೆ. ಬುಧವಾರದಂದು ಕಪ್ಪು ಬಟ್ಟೆಗಳನ್ನು ಧರಿಸಬೇಡಿ. ಬುಧವಾರದಂದು ಪಶ್ಚಿಮ ದಿಕ್ಕಿನಲ್ಲಿ ಪ್ರಯಾಣಿಸುವುದು ಶುಭವಲ್ಲ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...