ಕೆಲವರು ಜೀವನದಲ್ಲಿ ಎಷ್ಟೇ ಕಷ್ಟ ಪಟ್ಟರೂ ಏಳಿಗೆಯನ್ನು ಕಾಣಲು ಸಾಧ್ಯವಿಲ್ಲ. ಇದಕ್ಕೆ ಮುಖ್ಯ ಕಾರಣ ಮನೆಯ ವಾಸ್ತುದೋಷ. ಮನೆಯ ವಾಸ್ತು ಸರಿಯಾಗಿರದಿದ್ದಾಗ ಅಲ್ಲಿ ನಕರಾತ್ಮಕತೆ ತುಂಬಿರುತ್ತದೆ. ಹಾಗಾಗಿ ನಿಮ್ಮ ಬಡತನದ ಸಮಸ್ಯೆ ದೂರವಾಗಲು ಈ ವಸ್ತುಗಳನ್ನು ಮನೆಯಲ್ಲಿಟ್ಟುಕೊಳ್ಳಿ.
ಹಿಂದೂಧರ್ಮದಲ್ಲಿ ಶಂಖವನ್ನು ಪೂಜಿಸಲಾಗುತ್ತದೆ. ಇದರಲ್ಲಿ ಲಕ್ಷ್ಮಿದೇವಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ. ಹಾಗಾಗಿ ನಿಮ್ಮ ಬಡತನ ನಿವಾರಣೆಯಾಗಲು ಶಂಖವನ್ನು ಮನೆಯಲ್ಲಿಟ್ಟು ಪೂಜಿಸಿ.
ತೆಂಗಿನ ಕಾಯಿ ದೇವರ ಪೂಜೆಗೆ ಹೆಚ್ಚು ಬಳಸಲಾಗುತ್ತದೆ. ಯಾವುದೇ ಪೂಜೆ ಸಂಪೂರ್ಣವಾಗಲು ಆ ವೇಳೆ ದೇವರಿಗೆ ತೆಂಗಿನಕಾಯಿ ಒಡೆಯಲೇಬೇಕು. ಅಂತಹ ಶಕ್ತಿಶಾಲಿಯಾದ ತೆಂಗಿನಕಾಯಿಯನ್ನು ಕಲಶದಲ್ಲಿಟ್ಟು ಪೂಜೆ ಮಾಡುವುದರಿಂದ ಬಡತನ ನಿವಾರಣೆಯಾಗುತ್ತದೆ.
ಹಂಪಿಗೆ ಭೇಟಿ ನೀಡಿದಾಗ ನೋಡಲೇಬೇಕಾದ ಸ್ಥಳಗಳ ವಿವರ ಇಲ್ಲಿದೆ ನೋಡಿ…!
ಲಕ್ಷ್ಮಿ ಗಣೇಶ ಅಥವಾ ಲಕ್ಷ್ಮಿ ಕುಬೇರರ ಮೂರ್ತಿಯನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದರಿಂದ ಆ ಮನೆಗೆ ಲಕ್ಷ್ಮಿದೇವಿ ಪ್ರವೇಶಿಸುತ್ತಾಳೆ. ಇದರಿಂದ ನಿಮ್ಮ ಹಣಕಾಸಿನ ಸಮಸ್ಯೆ ದೂರವಾಗುತ್ತದೆಯಂತೆ.