ಕೆಲವರು ಎಷ್ಟೇ ಕಷ್ಟ ಪಟ್ಟು ದುಡಿದರೂ ಹಣ ಕೈಯಲ್ಲಿ ನಿಲ್ಲುವುದಿಲ್ಲ, ಇದರಿಂದ ಅವರು ಹಣಕ್ಕಾಗಿ ಸಾಲ ಮಾಡಿಕೊಂಡು ಸಾಲದ ಹೊರೆಯಲ್ಲೇ ಮುಳುಗುತ್ತಾರೆ. ಅವರು ಇಡೀ ಜೀವನವನ್ನು ಸಾಲ ತೀರಿಸಲು ಕಳೆದುಬಿಡುತ್ತಾರೆ. ಹಾಗಾಗಿ ಅಂತವರು ತಮ್ಮ ಹಣಕಾಸಿನ ಸಮಸ್ಯೆಯಿಂದ ಹೊರಗೆ ಬರಲು ಮಂಗಳವಾರದಂದು ದಾಸವಾಳ ಎಲೆಯಿಂದ ಹೀಗೆ ಮಾಡಿ.
ಮಂಗಳವಾರದಂದು ಶ್ರೀಗಣೇಶನ ಅನುಗ್ರಹ ಪ್ರಾಪ್ತಿಯಾದರೆ ನಿಮಗೆ ಜೀವನದಲ್ಲಿ ಎದುರಾದ ಸಂಕಷ್ಟ ನಿವಾರಣೆಯಾಗುತ್ತದೆ. ಹಾಗಾಗಿ ಪರಿಹಾರ ಶಾಸ್ತ್ರದಲ್ಲಿ ವಿಶೇಷವಾದ ಮಹತ್ವವುಳ್ಳ ದಾಸವಾಳವನ್ನು ಬಳಸಿಕೊಂಡು ಈ ತಂತ್ರ ಮಾಡಿ. ಮಂಗಳವಾರದಂದು 21 ದಾಸವಾಳದ ಎಲೆ ಮತ್ತು ಕಡ್ಡಿಯನ್ನು ಮನೆಗೆ ತಂದು ಸ್ವಚ್ಛ ಮಾಡಿ ಅಷ್ಟಗಂಧದ ಪುಡಿಯನ್ನು ಎಳ್ಳೆಣ್ಣೆಯಿಂದ ಮಿಕ್ಸ್ ಮಾಡಿ ದಾಸವಾಳ ಎಲೆಯ ಮೇಲೆ ದಾಸವಾಳದ ಕಡ್ಡಿಯಿಂದ ‘ಓಂ’ ಎಂದು ಬರೆಯಬೇಕು.
ಅರಿಶಿನದ ಮುದ್ದೆಯಿಂದ ಗಣೇಶನನ್ನು ತಯಾರಿಸಿ ಅದನ್ನುವೀಳ್ಯದೆಲೆಯ ಮೇಲೆ ಇಟ್ಟು ಕುಂಕುಮ, ಅಕ್ಷತೆಯನ್ನು ಹಾಕಬೇಕು. ಬಳಿಕ ಗಣೇಶನಿಗೆ ತುಪ್ಪದ ದೀಪ ಹಚ್ಚಿ ಎಲೆಗಳನ್ನು ಗಣೇಶನ ಮುಂದೆ ಇಟ್ಟು ಪೂಜೆ ಮಾಡಿ ಕಲ್ಲುಸಕ್ಕರೆಯನ್ನು ಗಣೇಶನಿಗೆ ಅರ್ಪಿಸಿ. ಇದನ್ನು 5 ಮಂಗಳವಾರ ಮಾಡಿ. ಬುಧವಾರದಂದು ಆ ಎಲೆಗಳನ್ನು ಮರದಡಿಯಲ್ಲಿ ಹಾಕಬೇಕು. ಹೀಗೆ ಮಾಡಿದರೆ ಹಣದ ಸಮಸ್ಯೆ ದೂರವಾಗುತ್ತದೆ.
ಆಯುರ್ವೇದವನ್ನು ಹಳೆಯ ಆರೋಗ್ಯ ವಿಜ್ಞಾನವೆಂದು ಪರಿಗಣಿಸಲಾಗಿದೆ. ಈಗ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇದನ್ನು ನಂಬುವವರು ಹೆಚ್ಚಾಗುತ್ತಿದ್ದಾರೆ. ಲೈಂಗಿಕತೆಯು ಜೀವನದ ಪ್ರಮುಖ…
ಯಾವುದೇ ಸಂಬಂಧವು ನಡೆಯಲು ಪರಸ್ಪರ ತಿಳವಳಿಕೆ ಬಹಳ ಮುಖ್ಯ. ಕೆಲವೊಮ್ಮೆ ಸಣ್ಣ ವಿಚಾರಗಳಿಗೆ ಸಂಬಂಧ ಮುರಿಯುತ್ತದೆ. ಸಂಬಂಧದಲ್ಲಿ ಜಗಳ ಬರುವುದು…
ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದ ಅನೇಕ ಜನರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಂತೆ, ಆತಂಕದಿಂದ ಕೆಲವರು ರಾತ್ರಿ ಸರಿಯಾಗಿ ನಿದ್ರೆ…
ಇಂದಿನ ಸಮಯದಲ್ಲಿ ಮಹಿಳೆಯರು ತಮ್ಮ ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಮಾತ್ರೆಗಳು, ಕಾಪರ್ ಟೀ, ಚುಚ್ಚುಮದ್ದು ಹಲವು…
ಚಿಕ್ಕಮಕ್ಕಳು ತಿನ್ನಲು ಇಷ್ಟಪಡುವುದಿಲ್ಲ. ಅವರಿಗೆ ಹಸಿವಾಗದಿರುವುದೇ ಇದಕ್ಕೆ ಕಾರಣ. ಅವರು ಸರಿಯಾಗಿ ಆಹಾರ ಸೇವಿಸದಿದ್ದರೆ ಅವರಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗಿ…
ಹವಾಮಾನ ಬದಲಾದಂತೆ ನಮ್ಮ ದಿನಚರಿಗಳನ್ನು ಬದಲಿಸುವುದು ಅವಶ್ಯಕ. ಇದರಲ್ಲಿ ಆಹಾರ ಕ್ರಮ ಕೂಡ ಒಂದು. ಹಾಗಾಗಿ ಈಗಾಗಲೇ ಚಳಿಗಾಲ ಮುಗಿದು…