Travel:ಒಂಟಿ ಮಹಿಳಾ ಪ್ರವಾಸಿಗರಿಗೆ ಬೆಸ್ಟ್ ಪ್ಲೇಸ್

ಮಹಿಳೆಯರು ಪುರುಷರಿಗಿಂತ ಕಡಿಮೆಯೇನಿಲ್ಲ. ಸ್ವತಂತ್ರವಾಗಿ ಬದುಕುವ ಕಲೆ ಅವರಿಗೆ ಗೊತ್ತು. ಆದ್ರೆ ಏಕಾಂಗಿಯಾಗಿ ಪ್ರವಾಸ ಮಾಡುವುದು ಸುಲಭವಲ್ಲ. ಅತ್ಯಾಚಾರ, ಕಿರುಕುಳ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇವೆ. ಆದ್ರೆ ಭಾರತದ ಕೆಲ ಪ್ರದೇಶಗಳನ್ನು ಯಾವುದೇ ಭಯವಿಲ್ಲದೆ ಒಂಟಿ ಮಹಿಳೆ ಸುತ್ತಾಡಿಕೊಂಡು ಬರಬಹುದು. ಸುಂದರ, ಶಾಂತವಾಗಿರುವ ಈ ಪ್ರದೇಶಗಳು ಮಹಿಳೆಯರಿಗೆ ಸುರಕ್ಷಿತ.

ಲಡಾಕ್ : ಈ ಸ್ಥಳ ಎಷ್ಟು ಸುಂದರವಾಗಿದೆಯೋ ಅಷ್ಟೇ ಶಾಂತವಾಗಿದೆ. ಹಾಗೆ ಸುರಕ್ಷಿತ ಕೂಡ. ಸಾಮಾನ್ಯವಾಗಿ ವಿದೇಶಿ ಮಹಿಳೆಯರು ಏಕಾಂಗಿಯಾಗಿ ಇಲ್ಲಿಗೆ ಬರ್ತಾರೆ. ಪರ್ವತಗಳ ಮಡಿಲಲ್ಲಿರುವ ಈ ಪ್ರದೇಶವನ್ನು ನೋಡಲು ಪ್ರವಾಸಿಗರು ಬೈಕ್ ನಲ್ಲಿ ಬರ್ತಾರೆ. ಇಲ್ಲಿನ ಜನರು ಶಾಂತ ಸ್ವಭಾವದವರು. ಹಾಗೆ ಮಹಿಳೆಯರಿಗೆ ಗೌರವ ನೀಡುತ್ತಾರೆ.

ಉದಯ್ಪುರ : ರಾಜಸ್ತಾನದ ಉದಯ್ಪುರದಲ್ಲಿ ಯಾವುದೇ ಭಯವಿಲ್ಲದೆ ಸುತ್ತಾಡಬಹುದು. ಸುಂದರ ಸರೋವರ, ಭವ್ಯ ಅರಮನೆಗಳನ್ನು ನೋಡಲು ದೂರದೂರುಗಳಿಂದ ಜನರು ಇಲ್ಲಿಗೆ ಬರ್ತಾರೆ. ಹನಿಮೂನ್ ಗೆ ಹೇಳಿ ಮಾಡಿಸಿದ ಸ್ಥಳ ಇದು.

ಉತ್ತರಖಂಡ್ : ಉತ್ತರ ಭಾರತದ ಉತ್ತರಖಂಡ್ ಬಹಳ ಸುಂದರ ಹಾಗೂ ಶಾಂತ ಪ್ರದೇಶ. ಇಲ್ಲಿನ ಜನರು ಸಹಾನುಭೂತಿಯುಳ್ಳವರು. ಸಹಾಯ ಮಾಡಲು ಯಾವಾಗ್ಲೂ ಇಲ್ಲಿನ ಜನರು ಸಿದ್ಧರಿರ್ತಾರೆ. ಒಂಟಿಯಾಗಿ ಮಹಿಳೆ ಅಥವಾ ಹುಡುಗಿ ಇಲ್ಲಿ ಯಾರ ಭಯವಿಲ್ಲದೆ ಸುತ್ತಾಡಬಹುದು.

Travel: ಮಕ್ಕಳೊಂದಿಗೆ ಪ್ರವಾಸಕ್ಕೆ ತೆರಳುವವರು ಈ ಸಲಹೆ ಪಾಲಿಸಿ

ಮೈಸೂರು : ಕರ್ನಾಟಕದ ಜನರಿಗೆ ಈ ಪ್ರದೇಶದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ತಾಯಿ ಚಾಮುಂಡಿ ನೆಲೆಸಿರುವ ಅರಮನೆ ನಗರಿ ಮೈಸೂರು ಪ್ರವಾಸಿಗರಿಗೆ ಸುರಕ್ಷಿತ ಸ್ಥಳ. ಸಾಮಾನ್ಯವಾಗಿ ಇಲ್ಲಿ ವಿದೇಶಿ ಮಹಿಳೆಯರ ದಂಡೇ ಇರುತ್ತದೆ.

ಸಿಕ್ಕಿಂ : ಸಿಕ್ಕಿಂ ಬಹಳ ಸುಂದರ ಹಾಗೂ ಸ್ವಚ್ಛ ಪ್ರದೇಶ. ಎತ್ತರದ ಬೆಟ್ಟ, ಕಣಿವೆಗಳು ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ಇಲ್ಲಿ ಮಹಿಳೆಯರು ಏಕಾಂಗಿಯಾಗಿ ಸುತ್ತಾಡಬಹುದು.

ಶಿಮ್ಲಾ : ಜನರ ಅಚ್ಚುಮೆಚ್ಚಿನ ಪ್ರವಾಸಿ ತಾಣಗಳಲ್ಲಿ ಶಿಮ್ಲಾ ಕೂಡ ಒಂದು. ಎಲ್ಲ ಋತುವಿನಲ್ಲಿಯೂ ಇಲ್ಲಿ ಪ್ರವಾಸಿಗರಿರ್ತಾರೆ. ಇಲ್ಲಿ ಮಹಿಳೆಯರು ಒಂಟಿಯಾಗಿ ಸುತ್ತಾಡಬಹುದಾಗಿದೆ.

 

Lovelydunia Admin

Recent Posts

ಆಯುರ್ವೇದದ ಪ್ರಕಾರ ಯಾವ ಸಮಯದಲ್ಲಿ ಸೆಕ್ಸ್ ಮಾಡಬಾರದು ಎಂಬುದನ್ನು ತಿಳಿಯಿರಿ….!

ಆಯುರ್ವೇದವನ್ನು ಹಳೆಯ ಆರೋಗ್ಯ ವಿಜ್ಞಾನವೆಂದು ಪರಿಗಣಿಸಲಾಗಿದೆ. ಈಗ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇದನ್ನು ನಂಬುವವರು ಹೆಚ್ಚಾಗುತ್ತಿದ್ದಾರೆ. ಲೈಂಗಿಕತೆಯು ಜೀವನದ ಪ್ರಮುಖ…

1 month ago

ನಿಮ್ಮ ಸಂಗಾತಿಗೆ ಈ ವಿಷಯ ಹೇಳಿದರೆ ನಿಮ್ಮ ಸಂಬಂಧ ಮುರಿಯಬಹುದು…!

ಯಾವುದೇ ಸಂಬಂಧವು ನಡೆಯಲು ಪರಸ್ಪರ ತಿಳವಳಿಕೆ ಬಹಳ ಮುಖ್ಯ. ಕೆಲವೊಮ್ಮೆ ಸಣ್ಣ ವಿಚಾರಗಳಿಗೆ ಸಂಬಂಧ ಮುರಿಯುತ್ತದೆ. ಸಂಬಂಧದಲ್ಲಿ ಜಗಳ ಬರುವುದು…

1 month ago

ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿಯ ವೇಳೆ ಈ ಜ್ಯೂಸ್ ಕುಡಿಯಿರಿ…!

ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದ ಅನೇಕ ಜನರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಂತೆ, ಆತಂಕದಿಂದ ಕೆಲವರು ರಾತ್ರಿ ಸರಿಯಾಗಿ ನಿದ್ರೆ…

1 month ago

ಜನನ ನಿಯಂತ್ರಣ ಮಾತ್ರೆ ಮತ್ತು ಕಾಪರ್ ಟಿ ಯಲ್ಲಿ ಯಾವುದು ಉತ್ತಮ ಎಂಬುದು ತಿಳಿಬೇಕಾ…?

ಇಂದಿನ ಸಮಯದಲ್ಲಿ ಮಹಿಳೆಯರು ತಮ್ಮ ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಮಾತ್ರೆಗಳು, ಕಾಪರ್ ಟೀ, ಚುಚ್ಚುಮದ್ದು ಹಲವು…

1 month ago

ಚಿಕ್ಕ ಮಕ್ಕಳ ಹಸಿವನ್ನು ಹೆಚ್ಚಿಸಲು ಇವುಗಳನ್ನು ತಿನ್ನಲು ನೀಡಿ…!

ಚಿಕ್ಕಮಕ್ಕಳು ತಿನ್ನಲು ಇಷ್ಟಪಡುವುದಿಲ್ಲ. ಅವರಿಗೆ ಹಸಿವಾಗದಿರುವುದೇ ಇದಕ್ಕೆ ಕಾರಣ. ಅವರು ಸರಿಯಾಗಿ ಆಹಾರ ಸೇವಿಸದಿದ್ದರೆ ಅವರಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗಿ…

1 month ago

ಚಳಿಗಾಲದಲ್ಲಿ ಸೇವಿಸಿದ ಈ ಪದಾರ್ಥಗಳನ್ನು ಬೇಸಿಗೆಯಲ್ಲಿ ಸೇವಿಸಿದರೆ ಅಪಾಯ ಕಾಡಬಹುದು ಎಚ್ಚರ…!

ಹವಾಮಾನ ಬದಲಾದಂತೆ ನಮ್ಮ ದಿನಚರಿಗಳನ್ನು ಬದಲಿಸುವುದು ಅವಶ್ಯಕ. ಇದರಲ್ಲಿ ಆಹಾರ ಕ್ರಮ ಕೂಡ ಒಂದು. ಹಾಗಾಗಿ ಈಗಾಗಲೇ ಚಳಿಗಾಲ ಮುಗಿದು…

1 month ago