ಮಕ್ಕಳನ್ನು ಬೆಳೆಸುವುದೇ ಒಂದು ಸವಾಲು. ಪೋಷಕರು ಎಷ್ಟೇ ಜಾಗೃತೆ ವಹಿಸಿದರೂ ಸಾಲದು. ಇನ್ನು ಕೆಲವೊಮ್ಮೆ ಹೇಗಪ್ಪಾ ಇವರನ್ನು ಬೆಳೆಸುವುದು ಎಂಬ ಗೊಂದಲ ಉಂಟಾಗುತ್ತದೆ. ಇದಕ್ಕೆ ಸದ್ಗುರು ಕೆಲವಷ್ಟು ಟಿಪ್ಸ್ ನೀಡುತ್ತಾರೆ. ಅವು ಹೀಗಿವೆ.
ಮಕ್ಕಳಿಗೆ ನೀವು ನೀಡುವ ಪ್ರೀತಿ ಸಹಜವಾಗಿರಲಿ. ಅಂದರೆ ಅವರು ಕೇಳಿದ್ದನ್ನೆಲ್ಲಾ ಕೊಡಿಸುವುದು ಪ್ರೀತಿಯಲ್ಲ, ಅದು ನೀವು ಮಕ್ಕಳನ್ನು ಹಾಳು ಮಾಡುತ್ತಿದ್ದೀರಿ ಎಂಬ ಅರ್ಥವನ್ನು ನೀಡುತ್ತದೆ. ನಿಜವಾಗಿಯೂ ನೀವು ಅವರನ್ನು ಪ್ರೀತಿಸುತ್ತಿದ್ದರೆ ಆ ವಸ್ತುವಿನ ಮೌಲ್ಯ ತಿಳಿಸಿಕೊಡಿ. ಯಾವುದು ಅಗತ್ಯ ಹಾಗೂ ಯಾವುದು ಅನಗತ್ಯ ಎಂಬುದನ್ನು ವಿವರಿಸಿ ಹೇಳಿ.
ನಿಮ್ಮ ಕನಸುಗಳನ್ನು ಪೂರ್ತಿಗೊಳಿಸಲು ಮಕ್ಕಳಿದ್ದಾರೆ ಎಂದು ಭಾವಿಸಬೇಡಿ. ಅವರಿಗೆ ಅವರದ್ದೇ ಆದ ಕನಸುಗಳಿರುತ್ತವೆ. ಅದನ್ನು ಬೆಂಬತ್ತಲು ಬಿಡಿ. ಮಕ್ಕಳ ಕೆಲಸಕ್ಕೆ ಬೆಂಬಲ ನೀಡಿ. ಗುರಿ ಸಾಧಿಸಲು ಸಹಾಯ ಮಾಡಿ. ತಪ್ಪು ದಾರಿ ಹಿಡಿದಾಗ ತಿದ್ದಿ.
ಮನೆಯೇ ಮೊದಲ ಪಾಠಶಾಲೆ ಎಂಬುದು ಇಂದಿಗೂ, ಎಂದಿಗೂ ಬದಲಾಗದ ಸತ್ಯ. ಹಾಗಾಗಿ ಮನೆಯಲ್ಲಿ ಸದಾ ಸಂತಸ ನೆಮ್ಮದಿ ಇರುವಂತೆ ನೋಡಿಕೊಳ್ಳಿ. ಮಕ್ಕಳಿಗೆ ಭಯ, ಆತಂಕದ ವಾತಾವರಣ ಇರಬಾರದು. ಹೆದರದೆ ಮುನ್ನುಗ್ಗುವ ಸ್ಥೈರ್ಯವನ್ನು ಮಕ್ಕಳಲ್ಲಿ ಬೆಳೆಸಿ ಎನ್ನುತ್ತಾರೆ ಸದ್ಗುರು.
ಆಯುರ್ವೇದವನ್ನು ಹಳೆಯ ಆರೋಗ್ಯ ವಿಜ್ಞಾನವೆಂದು ಪರಿಗಣಿಸಲಾಗಿದೆ. ಈಗ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇದನ್ನು ನಂಬುವವರು ಹೆಚ್ಚಾಗುತ್ತಿದ್ದಾರೆ. ಲೈಂಗಿಕತೆಯು ಜೀವನದ ಪ್ರಮುಖ…
ಯಾವುದೇ ಸಂಬಂಧವು ನಡೆಯಲು ಪರಸ್ಪರ ತಿಳವಳಿಕೆ ಬಹಳ ಮುಖ್ಯ. ಕೆಲವೊಮ್ಮೆ ಸಣ್ಣ ವಿಚಾರಗಳಿಗೆ ಸಂಬಂಧ ಮುರಿಯುತ್ತದೆ. ಸಂಬಂಧದಲ್ಲಿ ಜಗಳ ಬರುವುದು…
ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದ ಅನೇಕ ಜನರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಂತೆ, ಆತಂಕದಿಂದ ಕೆಲವರು ರಾತ್ರಿ ಸರಿಯಾಗಿ ನಿದ್ರೆ…
ಇಂದಿನ ಸಮಯದಲ್ಲಿ ಮಹಿಳೆಯರು ತಮ್ಮ ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಮಾತ್ರೆಗಳು, ಕಾಪರ್ ಟೀ, ಚುಚ್ಚುಮದ್ದು ಹಲವು…
ಚಿಕ್ಕಮಕ್ಕಳು ತಿನ್ನಲು ಇಷ್ಟಪಡುವುದಿಲ್ಲ. ಅವರಿಗೆ ಹಸಿವಾಗದಿರುವುದೇ ಇದಕ್ಕೆ ಕಾರಣ. ಅವರು ಸರಿಯಾಗಿ ಆಹಾರ ಸೇವಿಸದಿದ್ದರೆ ಅವರಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗಿ…
ಹವಾಮಾನ ಬದಲಾದಂತೆ ನಮ್ಮ ದಿನಚರಿಗಳನ್ನು ಬದಲಿಸುವುದು ಅವಶ್ಯಕ. ಇದರಲ್ಲಿ ಆಹಾರ ಕ್ರಮ ಕೂಡ ಒಂದು. ಹಾಗಾಗಿ ಈಗಾಗಲೇ ಚಳಿಗಾಲ ಮುಗಿದು…