ಭಾರತೀಯ ಯೋಗಿ ಸದ್ಗುರು ಬಗ್ಗೆ ತಿಳಿಯದವರಾರು? ಆಧ್ಯಾತ್ಮಿಕ ಸಂದೇಶ ನೀಡುವ ಅವರು ಮಕ್ಕಳ ಪಾಲನೆ ವಿಚಾರದಲ್ಲಿ ಹೆತ್ತವರ ಜವಾಬ್ದಾರಿಯೇ ದೊಡ್ಡದು ಎಂಬುದನ್ನು ಹೀಗೆ ತಿಳಿಸಿದ್ದಾರೆ.
ಮಕ್ಕಳನ್ನು ಹೊಂದುವುದು ಮಾತ್ರವಲ್ಲ, ಅವರೊಂದಿಗೆ ಸಮಯ ಕಳೆಯುವುದು ಕೂಡಾ ಸಂತಸದ ಸಂಗತಿಯೇ. ಅವರನ್ನು ನಿಮ್ಮ ಭವಿಷ್ಯದ ಹೂಡಿಕೆ ಎಂದು ತಿಳಿದುಕೊಳ್ಳದೆ ಅವರೊಂದಿಗೆ ಸಮಯ ಕಳೆಯುವುದು ಕೂಡ ಅಷ್ಟೇ ಮುಖ್ಯ.
ನಿಮ್ಮ ಮಗು ಹೇಗಿರಬೇಕೆಂದು ಇರಲು ಬಯಸುತ್ತದೋ, ಹಾಗೇ ಇರಲು ಬಿಡಿ. ನಿಮಗೆ ಬೇಕಾದಂತೆ ರೂಪುಗೊಳಿಸುವುದು ತಪ್ಪು. ನೀವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಸಾಧನೆ ಮಗು ಮಾಡಬಹುದು. ಅದಕ್ಕೆ ಅವಕಾಶ ಮಾಡಿಕೊಡಿ.
ಮಕ್ಕಳ ಬಾಲ್ಯವನ್ನು ಉಸಿರುಗಟ್ಟಿಸದಿರಿ. ಅವರಿಗೆ ಎಲ್ಲಾ ಕ್ಷಣಗಳನ್ನು ಅನುಭವಿಸಲು, ಕಲಿಯಲು ಬಿಡಿ. ಮಕ್ಕಳೇ ನಿಮ್ಮಂತೆ ವರ್ತಿಸಬೇಕು ಎಂದು ಬಯಸುವುದು ತಪ್ಪು.
ಮಕ್ಕಳಿಗೆ ಬೆಳೆಯಲು ಅನುಕೂಲವಾಗುವ ಉತ್ತಮ ವಾತಾವರಣ ಸೃಷ್ಟಿಸಿ. ಅವರೊಂದಿಗೆ ನೀವು ಸಮಯ ಕಳೆಯಿರಿ. ಅವರು ಓದುವಾಗ ನೀವೂ ಪುಸ್ತಕ ಹಿಡಿದು ಓದಿ, ಇಲ್ಲವೇ ಬರೆಯಿರಿ.
ಆಯುರ್ವೇದವನ್ನು ಹಳೆಯ ಆರೋಗ್ಯ ವಿಜ್ಞಾನವೆಂದು ಪರಿಗಣಿಸಲಾಗಿದೆ. ಈಗ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇದನ್ನು ನಂಬುವವರು ಹೆಚ್ಚಾಗುತ್ತಿದ್ದಾರೆ. ಲೈಂಗಿಕತೆಯು ಜೀವನದ ಪ್ರಮುಖ…
ಯಾವುದೇ ಸಂಬಂಧವು ನಡೆಯಲು ಪರಸ್ಪರ ತಿಳವಳಿಕೆ ಬಹಳ ಮುಖ್ಯ. ಕೆಲವೊಮ್ಮೆ ಸಣ್ಣ ವಿಚಾರಗಳಿಗೆ ಸಂಬಂಧ ಮುರಿಯುತ್ತದೆ. ಸಂಬಂಧದಲ್ಲಿ ಜಗಳ ಬರುವುದು…
ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದ ಅನೇಕ ಜನರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಂತೆ, ಆತಂಕದಿಂದ ಕೆಲವರು ರಾತ್ರಿ ಸರಿಯಾಗಿ ನಿದ್ರೆ…
ಇಂದಿನ ಸಮಯದಲ್ಲಿ ಮಹಿಳೆಯರು ತಮ್ಮ ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಮಾತ್ರೆಗಳು, ಕಾಪರ್ ಟೀ, ಚುಚ್ಚುಮದ್ದು ಹಲವು…
ಚಿಕ್ಕಮಕ್ಕಳು ತಿನ್ನಲು ಇಷ್ಟಪಡುವುದಿಲ್ಲ. ಅವರಿಗೆ ಹಸಿವಾಗದಿರುವುದೇ ಇದಕ್ಕೆ ಕಾರಣ. ಅವರು ಸರಿಯಾಗಿ ಆಹಾರ ಸೇವಿಸದಿದ್ದರೆ ಅವರಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗಿ…
ಹವಾಮಾನ ಬದಲಾದಂತೆ ನಮ್ಮ ದಿನಚರಿಗಳನ್ನು ಬದಲಿಸುವುದು ಅವಶ್ಯಕ. ಇದರಲ್ಲಿ ಆಹಾರ ಕ್ರಮ ಕೂಡ ಒಂದು. ಹಾಗಾಗಿ ಈಗಾಗಲೇ ಚಳಿಗಾಲ ಮುಗಿದು…