ಹಿಂದೆಲ್ಲಾ ಸಂಬಂಧ ಮುರಿದಾಗ ಅಂದರೆ ಬ್ರೇಕಪ್ ಆದಾಗ, ವಿವಾಹ ವಿಚ್ಛೇದನ ದೊರೆತಾಗ ಜೀವನವೇ ಸೋರಿ ಹೋದ, ಕುಸಿದು ಹೋದ ಅನುಭವ ಆಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಬ್ರೇಕ ಅಪ್ ಅಂದರೆ ಸ್ವತಂತ್ರ ದೊರೆಯುವುದು ಎಂಬ ಭಾವನೆ ಇಂದಿನ ಜನರಲ್ಲಿ ಬೇರೂರುತ್ತಿದೆ.
ಇದೀಗ ಬ್ರೇಕಪ್ ಫೋಟೋ ಶೂಟ್, ಪಾರ್ಟಿ ನಡೆಸುವುದು ಸಾಮಾನ್ಯವಾಗುತ್ತಿದೆ. ಒಂದು ಸಂಬಂಧ ನನ್ನನ್ನು ಎಷ್ಟೊಂದು ಕಟ್ಟಿಹಾಕಿತ್ತು,ಹಾಗೂ ಅದರಿಂದ ಮುಕ್ತವಾದ ಖುಷಿ ನನಗೆಷ್ಟಿದೆ ಎಂಬುದನ್ನು ತೋರಿಸಿಕೊಡುವುದೇ ಟ್ರೆಂಡಿಂಗ್ ಆಗುತ್ತಿದೆ.
ಸಂಬಂಧಗಳಿಂದ ದೂರವಾದ ಬಳಿಕ ಸಮಾಜ ನಮ್ಮನ್ನು ಹೇಗೆ ನೋಡುತ್ತದೆ ಎಂಬ ಭೀತಿಯೇ ಹಿಂದೆ ಹಲವರನ್ನು ಆತ್ಮಹತ್ಯೆಗೆ ಪ್ರೇರೇಪಿಸುವ ಘಟನೆಗಳೂ ಇದ್ದವು. ಆದರೆ ಇಂದಿನ ಜನರೇಷನ್ ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಮಗೆ ಬೇಕಾದಂತೆ ಬದುಕುವ ಸ್ವೇಚ್ಛೆ ದೊರೆತಿದೆ ಎಂದು ಭಾವಿಸುತ್ತದೆ.
ಹಿಂದೆಲ್ಲಾ ಸಂಬಂಧ ಮುರಿದು ಬಿದ್ದ ನೋವಿನಲ್ಲೇ ಕುಡಿತಕ್ಕೆ ದಾಸರಾದ, ಜೀವನ ಹಾಳುಮಾಡಿಕೊಂಡ ನೂರಾರು ಕತೆಗಳಿದ್ದವು. ಇಂದು ಅದೇ ಖುಷಿಗೆ ಗೆಳೆಯರನ್ನು ಕರೆದು ಪಾರ್ಟಿ ಮಾಡುವ ಪರಿಪಾಠ ಬೆಳೆಯುತ್ತಿದೆ. ಕಾಲ ಬದಲಾಗಿದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ಸಾಕ್ಷಿ ಬೇಕಿಲ್ಲವೇನೋ.
ಆಯುರ್ವೇದವನ್ನು ಹಳೆಯ ಆರೋಗ್ಯ ವಿಜ್ಞಾನವೆಂದು ಪರಿಗಣಿಸಲಾಗಿದೆ. ಈಗ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇದನ್ನು ನಂಬುವವರು ಹೆಚ್ಚಾಗುತ್ತಿದ್ದಾರೆ. ಲೈಂಗಿಕತೆಯು ಜೀವನದ ಪ್ರಮುಖ…
ಯಾವುದೇ ಸಂಬಂಧವು ನಡೆಯಲು ಪರಸ್ಪರ ತಿಳವಳಿಕೆ ಬಹಳ ಮುಖ್ಯ. ಕೆಲವೊಮ್ಮೆ ಸಣ್ಣ ವಿಚಾರಗಳಿಗೆ ಸಂಬಂಧ ಮುರಿಯುತ್ತದೆ. ಸಂಬಂಧದಲ್ಲಿ ಜಗಳ ಬರುವುದು…
ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದ ಅನೇಕ ಜನರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಂತೆ, ಆತಂಕದಿಂದ ಕೆಲವರು ರಾತ್ರಿ ಸರಿಯಾಗಿ ನಿದ್ರೆ…
ಇಂದಿನ ಸಮಯದಲ್ಲಿ ಮಹಿಳೆಯರು ತಮ್ಮ ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಮಾತ್ರೆಗಳು, ಕಾಪರ್ ಟೀ, ಚುಚ್ಚುಮದ್ದು ಹಲವು…
ಚಿಕ್ಕಮಕ್ಕಳು ತಿನ್ನಲು ಇಷ್ಟಪಡುವುದಿಲ್ಲ. ಅವರಿಗೆ ಹಸಿವಾಗದಿರುವುದೇ ಇದಕ್ಕೆ ಕಾರಣ. ಅವರು ಸರಿಯಾಗಿ ಆಹಾರ ಸೇವಿಸದಿದ್ದರೆ ಅವರಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗಿ…
ಹವಾಮಾನ ಬದಲಾದಂತೆ ನಮ್ಮ ದಿನಚರಿಗಳನ್ನು ಬದಲಿಸುವುದು ಅವಶ್ಯಕ. ಇದರಲ್ಲಿ ಆಹಾರ ಕ್ರಮ ಕೂಡ ಒಂದು. ಹಾಗಾಗಿ ಈಗಾಗಲೇ ಚಳಿಗಾಲ ಮುಗಿದು…