Kannada Duniya

ದೇವರನ್ನು ಮೆಚ್ಚಿಸಲು ಯಾವ ಜಪಮಾಲೆಯನ್ನು ಪಠಿಸಬೇಕು ಎಂಬುದನ್ನು ತಿಳಿಯಿರಿ…!

ಪುರಾಣಗಳಲ್ಲಿ ನಿಮ್ಮ ಇಷ್ಟದೇವರನ್ನು ಮೆಚ್ಚಿಸಲು ಸುಲಭವಾದ ಮತ್ತು ಉತ್ತಮವಾದ ಮಾರ್ಗವೆಂದರೆ ಜಪಮಾಲೆಯನ್ನು ಪಠಿಸುವುದು. ಆದರೆ ಜಪಮಾಲೆಯಲ್ಲಿ ಹಲವು ವಿಧಗಳಿವೆ. ಅದರ ಮೂಲಕ ದೇವರನ್ನು ಆಹ್ವಾನ ಮಾಡಲಾಗುತ್ತದೆ. ಹಾಗಾಗಿ ಯಾವ ದೇವರನ್ನು ಮೆಚ್ಚಿಸಲು ಯಾವ ಜಪಮಾಲೆಯನ್ನು ಪಠಿಸಬೇಕು ಎಂಬುದನ್ನು ತಿಳಿಯಿರಿ.

ಗಣೇಶ : ಶ್ರೀಗಣೇಶ ಮತ್ತು ದೇವಗುರು ಬ್ರಹಸ್ಪತಿ ಅರಿಶಿನ ಮಾಲೆಯನ್ನು ಜಪಿಸಿದರೆ ಸಂತೋಷಗೊಳ್ಳುತ್ತಾರೆ. ಇದನ್ನು ಮಕ್ಕಳ ಸಾಧನೆಗಾಗಿ ಜಪಿಸಲಾಗುತ್ತದೆ. ಕಾಳಿ ಮಾತೆಯನ್ನು ಆಹ್ವಾನಿಸಲು ಕಪ್ಪು ಅರಿಶಿನ ಅಥವಾ ನೀಳಿ ಕಮಲದ ಮಾಲೆಯನ್ನು ಜಪಿಸಿ.

ಶಿವ : ಶಿವನನ್ನು ಮೆಚ್ಚಿಸಲು ರುದ್ರಾಕ್ಷಿ ಮಾಲೆಯನ್ನು ಶಿವ ಮಂತ್ರದೊಂದಿಗೆ ಜಪಿಸಿ. ಇದರಿಂದ ನಿಮ್ಮ ಇಷ್ಟಾರ್ಥ ಈಡೇರುತ್ತದೆ.

ಮಾತೆ ಅಂಬಾ : ಮಾತೆ ಅಂಬೆಯನ್ನು ಹರಳುಗಳ ಮಾಲೆಯೊಂದಿಗೆ ಜಪಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರಿಂದ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ಲಭಿಸುತ್ತದೆ.

ಈ ರಾಶಿಯಲ್ಲಿ ಜನಿಸಿದವರ ಮೇಲೆ ಕೇತುವಿನ ನೆರಳು ಬೀಳುತ್ತದೆಯಂತೆ…!

ಮಾತೆ ದುರ್ಗಾ : ದುರ್ಗೆಯನ್ನು ಮೆಚ್ಚಿಸಲು ಕೆಂಪು ಶ್ರೀಗಂಧದ ಮಾಲೆ ಅಥವಾ ರಕ್ತ ಚಂದನದ ಮಾಲೆಯನ್ನು ಜಪಿಸಿ. ಹಾಗೇ ಶ್ರೀಕೃಷ್ಣನ ಜಪಿಸಲು ಬಿಳಿ ಚಂದನದ ಮಾಲೆಯನ್ನು ಬಳಸಿ.

ಸೂರ್ಯದೇವ : ಸೂರ್ಯದೇವನ ಅನುಗ್ರಹ ಪಡೆಯಲು ಮಾಣಿಕ್ಯ ಅಥವಾ ಬಿಲ್ವ ಮರದ ಎಲೆಗಳನ್ನು ಜಪಿಸಿ. ಇದರಿಂದ ಪಿತೃದೋಷ ಪರಿಹಾರವಾಗುತ್ತದೆ.

ಲಕ್ಷ್ಮಿ ದೇವಿ : ಲಕ್ಷ್ಮಿದೇವಿಯನ್ನು ಅನುಗ್ರಹ ಪಡೆಯಲು ತುಳಸಿ ಮತ್ತು ಶ್ರೀಗಂಧದ ಮಾಲೆಯನ್ನು ವಿಷ್ಣವಿನ ಮಂತ್ರದೊಂದಿಗೆ ಜಪಿಸಿ.

ಸರಸ್ವತಿ : ಸರಸ್ವತಿಯನ್ನು ಒಲಿಸಿಕೊಳ್ಳಲು ಸ್ಪಟಿಕ ಮಾಲೆಯನ್ನು ಜಪಿಸಿ. ಇದರಿಂದ ನಿಮ್ಮ ಮನಸ್ಸು ಶಾಂತವಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...