Kannada Duniya

ಅದೃಷ್ಟಕ್ಕಿಂತ ಹೆಚ್ಚಾಗಿ ಕರ್ಮದ ಮೇಲೆ ನಂಬಿಕೆ ಇಡುತ್ತಾರೆ ಈ ರಾಶಿ ಚಕ್ರದವರು…!

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಗೆ ಸಂಬಂಧಿಸಿದಂತೆ ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವ, ವ್ಯಕ್ತಿತ್ವ ವಿಭಿನ್ನವಾಗಿರುತ್ತದೆ. ಹಾಗೇ ಅವರ ಇಷ್ಟಕಷ್ಟಗಳು ಕೂಡ ಬೇರೆ ಬೇರೆಯಾಗಿರುತ್ತದೆ.

ಕೆಲವರು ಅದೃಷ್ಟವನ್ನು ನಂಬಿದರೆ, ಕೆಲವರು ಕರ್ಮವನ್ನು ನಂಬುತ್ತಾರೆ. ಕರ್ಮದ ಮೂಲಕ ಜೀವನವನ್ನು ಬದಲಾಯಿಸುತ್ತಾರೆ. ಅಂತಹ ರಾಶಿಚಕ್ರದವರು ಯಾರೆಂಬುದನ್ನು ತಿಳಿದುಕೊಳ್ಳೋಣ.

ವೃಷಭ : ಇವರು ಕಷ್ಟಪಟ್ಟು ದುಡಿಯುತ್ತಾರೆ. ಬೇಗನೆ ಆಯಾಸಗೊಳ್ಳುವುದಿಲ್ಲ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುತ್ತಾರೆ. ಇವರು ತಮ್ಮ ಪರಿಶ್ರಮದಿಂದಲೇ ಶ್ರೀಮಂತರಾಗುತ್ತಾರೆ.

ಮಕರ : ಇವರು ಕಷ್ಟಪಟ್ಟು ದುಡಿಯುತ್ತಾರೆ, ಎಲ್ಲಾ ಕೆಲಸಗಳನ್ನು ಸಮಯಕ್ಕೆ ಮುಂಚಿತವಾಗಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಾರೆ. ಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತಾರೆ. ಬುದ್ಧಿವಂತಿಕೆಯಿಂದ ಇವರು ಏನನ್ನಾದರೂ ಸಾಧಿಸುತ್ತಾರೆ.

ಕನ್ಯಾ : ಇವರು ತುಂಬಾ ಶ್ರಮಜೀವಿಗಳು. ಜೀವನದಲ್ಲಿ ಸವಾಲುಗಳನ್ನು ಧೈರ್ಯದಿಂದ ಎದುರಿಸುತ್ತಾರೆ. ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾರೆ. ಇವರು ತುಂಬಾ ಬುದ್ಧಿವಂತರು ಮತ್ತು ಆ ಮೂಲಕ ಹಣವನ್ನು ಗಳಿಸುತ್ತಾರೆ.

ಮಹಿಳೆಯರೇ.. ನೀವು ಈ ಸಮಸ್ಯೆಗಳನ್ನು ಹೊಂದಿದ್ದರೆ ಈ ಮೂರು ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ..!

ಕುಂಭ : ಇವರು ಒಮ್ಮೆ ಕೆಲಸವನ್ನು ಮಾಡಲು ಮನಸ್ಸು ಮಾಡಿದರೆ ಅದರಲ್ಲಿ ಯಶಸ್ಸು ಕಾಣದೆ ಹಿಂತಿರುಗುವುದಿಲ್ಲ. ಇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಇವರು ಕಠಿಣ ಪರಿಶ್ರಮದಿಂದಲೇ ಜೀವನದಲ್ಲಿ ಮುಂದೆ ಬರುತ್ತಾರೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...