
ಹಿಂದೂಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ದಾನ ಮಾಡುವುದರಿಂದ ಪುಣ್ಯ ಲಭಿಸುತ್ತದೆಯಂತೆ. ಆದರೆ ದಾನ ಮಾಡಿದನ್ನು ಯಾರಿಗೂ ಹೇಳಬಾರದಂತೆ. ಇದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆಯಂತೆ.
ಜಲದಾನ : ಜನರಿಗೆ ನೀರಿನ ಅವಶ್ಯಕತೆ ತುಂಬಾ ಇರುತ್ತದೆ. ಹಾಗಾಗಿ ಅಲೆದಾಡುವವರಿಗೆ ಅಥವಾ ದಾರಿಹೋಕರಿಗೆ ನೀರನ್ನು ನೀಡಿ. ಜನರು ನಡೆದಾಡುವಂತಹ ಸ್ಥಳದಲ್ಲಿ ಮಡಿಕೆಯಲ್ಲಿ ನೀರನ್ನು ಇಡಿ. ಇದರಿಂದ ನಿಮಗೆ ಪುಣ್ಯ ಪ್ರಾಪ್ತಿಯಾಗುತ್ತದೆಯಂತೆ.
ಹಣ ದಾನ : ಹಸಿದವರಿಗೆ , ಬಡವರಿಗೆ ಅನ್ನದಾನ ಅಥವಾ ಹಣದ ದಾನ ನೀಡಬೇಕು. ದೇವಸ್ಥಾನ, ಅನಾಥಾಶ್ರಮಗಳಲ್ಲಿ ಅನ್ನಸಂತರ್ಪಣೆಗೆ ದೇಣಿಗೆ ನೀಡುವುದರಿಂದ ದೇವರ ಆಶೀರ್ವಾದ ದೊರೆಯುತ್ತದೆ. ಇದರಿಂದ ನಿಮಗೆ ಅದೃಷ್ಟ ಒಲಿದು ಬರುತ್ತದೆ.
ದೇವಸ್ಥಾನದಲ್ಲಿ ಸಿಕ್ಕಿದ ಪ್ರಸಾದದ ಹೂವನ್ನು ದೇಹದ ಈ ಭಾಗದಲ್ಲಿ ಇಟ್ಟುಕೊಂಡರೆ ಒಳ್ಳೆಯದು…!
ಬೆಲ್ಲ : ಜನರಿಗೆ ಬೆಲ್ಲವನ್ನು ದಾನ ಮಾಡಿ. ಇದರಿಂದ ನಿಮಗೆ ಸಂತೋಷ, ಸಮೃದ್ಧಿ ನೆಲೆಸಿರುತ್ತದೆಯಂತೆ. ಇದರಿಂದ ದೇವರುಗಳು ಸಂತುಷ್ಟರಾಗಿ ಆಶೀರ್ವಾದ ನೀಡುತ್ತಾರೆ.