
ಸೆಪ್ಟೆಂಬರ್19ರಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಗಣೇಶನನ್ನು ಕೂರಿಸಿ ಪೂಜೆ ಮಾಡುತ್ತಾರೆ. ಆದರೆ ಗಣೇಶನನ್ನು ಕೂರಿಸಿ ಪೂಜೆ ಮಾಡಿದ ಬಳಿಕ ಈ ತಪ್ಪನ್ನು ಮಾಡಿದರೆ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆಯಂತೆ.
ಗಣೇಶ ಚತುರ್ಥಿಯ ದಿನ ಚಂದ್ರನಿಗೆ ಸಂಬಂಧಿಸಿದ ವಸ್ತುಗಳನ್ನು ಅರ್ಪಿಸಬೇಡಿ. ಯಾಕೆಂದರೆ ಚಂದ್ರ ಗಣಪತಿಗೆ ಅಪಹಾಸ್ಯ ಮಾಡಿದ ಕಾರಣ ಆತನಿಗೆ ಸಂಬಂಧಪಟ್ಟ ಬಿಳಿ ಶ್ರೀಗಂಧ, ಬಿಳಿ ವಸ್ತುಗಳನ್ನು ಗಣಪತಿಗೆ ಅರ್ಪಿಸಬೇಡಿ.
ಕನಸಿನಲ್ಲಿ ಈ ವಸ್ತುಗಳನ್ನು ಕಾಣಿಸಿಕೊಂಡರೆ ಹಣ ಪ್ರಾಪ್ತಿಯಾಗುತ್ತದೆ….!
ಗಣಪತಿಯ ಪೂಜೆಯಲ್ಲಿ ಮುರಿದ ಅಕ್ಕಿಕಾಳನ್ನು ಅಕ್ಷತೆಗಾಗಿ ಬಳಸಬೇಡಿ. ಇದರಿಂದ ಬಡತನ ಆವರಿಸುತ್ತದೆಯಂತೆ. ಅಲ್ಲದೇ ಗಣಪತಿಯ ಪೂಜೆಯಲ್ಲಿ ತುಳಸಿಯನ್ನು ಬಳಸಬೇಡಿ. ಇದರಿಂದ ಗಣೇಶ ಕೋಪಗೊಳ್ಳುತ್ತಾನಂತೆ.